ರಾಷ್ಟ್ರೀಯ ತೋಟಗಾರಿಕೆ ಮಿಷನ್ (National Horticulture Mission – NHM) ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದ್ದು, ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿ ಮತ್ತು ಸುಧಾರಣೆಗಾಗಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯು ತೋಟಗಾರಿಕೆ ಉತ್ಪಾದನೆಯನ್ನು ಹೆಚ್ಚಿಸುವ, ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಸುಧಾರಿಸುವ ಗುರಿ ಹೊಂದಿದೆ.
ಹೊಸದುರ್ಗ ತಾಲ್ಲೂಕಿನಲ್ಲಿ ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ತೋಟಗಾರಿಕೆ ಬೆಳೆಗಳನ್ನು ಬೆಳೆಸುವ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025 ಜೂನ್ 20.
ಯೋಜನೆಯ ಪ್ರಮುಖ ಅಂಶಗಳು:ಈ ಯೋಜನೆಯಡಿಯಲ್ಲಿ ದಾಳಿಂಬೆ, ಮಾವು, ಪೇರಲ, ಮೋಸಂಬಿ, ಡ್ರ್ಯಾಗನ್ ಫ್ರೂಟ್, ಗೇರು, ಕೋಕೋ, ಕಾಳುಮೆಣಸು, ಕಂದು ಮತ್ತು ಅಂಗಾಂಶ ಬಾಳೆ, ಪಪ್ಪಾಯ, ಹೈಬ್ರಿಡ್ ತರಕಾರಿ ಹಾಗೂ ಬಿಡಿಹೂವು ಬೆಳೆಗಳ ಹೊಸ ಪ್ರದೇಶ ವಿಸ್ತರಣೆಗೆ ಸಹಾಯಧನ ದೊರೆಯಲಿದೆ.
ಇದಲ್ಲದೆ, ತರಕಾರಿ ಬೆಳೆಗಳಿಗೆ ಆಧಾರ ವ್ಯವಸ್ಥೆ, ಪ್ಲಾಸ್ಟಿಕ್ ಮಲ್ಚಿಂಗ್, ಕಳೆ ನಿಯಂತ್ರಣ ಮ್ಯಾಟ್, ಪಕ್ಷಿ ನಿರೋಧಕ ಬಲೆ, ಸಮಗ್ರ ಕೀಟ ರೋಗ ಹಾಗೂ ಪೋಷಕಾಂಶ ನಿರ್ವಹಣೆ ಕಾರ್ಯಚಟುವಟಿಕೆಗಳಿಗೂ ಸಹಾಯಧನ ಒದಗಿಸಲಾಗುವುದು.
ಹೆಚ್ಚುವರಿ ಘಟಕಗಳು:
ಈರುಳ್ಳಿ ಶೇಖರಣಾ ಘಟಕವೈಯಕ್ತಿಕ ಕೃಷಿ ಹೊಂಡಸಣ್ಣ ಅಳತೆಯ ಅಣಬೆ ಉತ್ಪಾದನಾ ಘಟಕಸೌರ ಶೋಷಕ ಯಂತ್ರ (Solar Crop Dryer)ಜೇನು ಕೃಷಿ ಉತ್ತೇಜನ ಕಾರ್ಯಕ್ರಮಗಳು
ಈ ಎಲ್ಲಾ ಘಟಕಗಳಿಗೆ ಶೇಕಡಾ 25 ರಿಂದ 50ರಷ್ಟು ಸಹಾಯಧನ ದೊರೆಯಲಿದೆ.
ಅರ್ಜಿಗೆ ಅಗತ್ಯ ದಾಖಲೆಗಳು:
ಪ್ರೂಟ್ಸ್ ನೋಂದಣಿ ಸಂಖ್ಯೆ2025-26ನೇ ಸಾಲಿನ ಪಹಣಿ ನಕಲುಆಧಾರ್ ಕಾರ್ಡ್ ಪ್ರತಿಯುಬ್ಯಾಂಕ್ ಪಾಸ್ಬುಕ್ ಪ್ರತಿಯುಪಾಸ್ಪೋರ್ಟ್ ಗಾತ್ರದ ಫೋಟೋಇತರೆ ಸಂಬಂಧಿತ ದಾಖಲೆಗಳು.
ಅರ್ಜಿಯನ್ನು 2025 ಜೂನ್ 20ರೊಳಗಾಗಿ ಹೊಸದುರ್ಗ ತೋಟಗಾರಿಕೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ.ಅರ್ಜಿಗಳನ್ನು ಮಾರ್ಗಸೂಚಿ ಪ್ರಕಾರ, ಅರ್ಹತೆ ಮತ್ತು ಜೇಷ್ಠತೆ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಕಛೇರಿ, ಹೊಸದುರ್ಗ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.