ರೈತರಿಗೆ ಮತ್ತೊಂದು ಸಿಹಿ ಸುದ್ದಿ! ಈಗಾಗಲೇ ಹಲವಾರು ರೈತ ಪರ ಯೋಜನೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಈಗ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಹೋಲ್ಡರ್ಗಳಿಗಾಗಿ ಬಡ್ಡಿದರ ರಿಯಾಯಿತಿಯನ್ನು ವಿಸ್ತರಿಸಿದೆ.
ಕೇಂದ್ರ ಸರ್ಕಾರವು ₹3 ಲಕ್ಷವರೆಗೆ ಅಲ್ಪಾವಧಿ ಕೃಷಿ ಸಾಲದ ಮೇಲೆ ವಿಧಿಸಲಾಗುತ್ತಿದ್ದ 7% ಬಡ್ಡಿದರದಲ್ಲಿ 1.5% ರಿಯಾಯಿತಿ ನೀಡಿದ್ದು, ಸಮಯಕ್ಕೆ ಸಾಲ ಪಾವತಿ ಮಾಡುವ ರೈತರಿಗೆ 3% ಹೆಚ್ಚುವರಿ ಬಡ್ಡಿ ವಿನಾಯಿತಿ ನೀಡುತ್ತಿದೆ. ಈ ಮೂಲಕ ರೈತರಿಗೆ ಕೇವಲ 4% ಬಡ್ಡಿದರದಲ್ಲಿ ಸಾಲ ಲಭ್ಯವಾಗಲಿದೆ. ಈ ಯೋಜನೆಯಿಂದ ಸುಮಾರು 7.57 ಕೋಟಿ ರೈತರಿಗೆ ಲಾಭವಾಗಲಿದೆ.
ಇದಕ್ಕೂ ಹೆಚ್ಚು, ಮುಂಗಾರು ಮಳೆ ಆರಂಭವಾಗುತ್ತಿರುವ ಈ ಸಮಯದಲ್ಲಿ ಕೇಂದ್ರ ಸರ್ಕಾರ 14 ಖಾರಿಫ್ ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಿಸುವ ಮೂಲಕ ಮತ್ತೊಂದು ಸಿಹಿಸುದ್ದಿ ನೀಡಿದೆ. ಕೇಂದ್ರ ಸಚಿವ ಸಂಪುಟ ಈ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಿದ್ದು, ₹2 ಲಕ್ಷವರೆಗೆ ಬಡ್ಡಿ ರಹಿತ ಕೃಷಿ ಸಾಲ ನೀಡಲು ಸಹ ಒಪ್ಪಿಗೆ ನೀಡಿದೆ.ಹೆಚ್ಚಳದ ವಿವರಗಳು:
ಹೆಚ್ಚಳದ ವಿವರಗಳು:
ಹುಚ್ಚೆಳ್ಳು/ಗುರೆಳ್ಳುಗೆ: ಕ್ವಿಂಟಾಲ್ಗೆ ₹820 ಹೆಚ್ಚಳರಾಗಿ: ₹596 ಹೆಚ್ಚಳಭತ್ತ: ₹65 ಹೆಚ್ಚಳತೊಗರಿ ಬೇಳೆ: ₹450 ಹೆಚ್ಚಳಉದ್ದಿನ ಬೇಳೆ: ₹400 ಹೆಚ್ಚಳ
ಈ ಕ್ರಮಗಳು ರೈತರ ಆರ್ಥಿಕ ಭದ್ರತೆಗೆ ಗಟ್ಟಿ ಬೆಂಬಲವಾಗುತ್ತವೆ.