Agricultural equipments:ರೈತರಿಗೆ ಪವರ್ ಟಿಲ್ಲರ್, ರೋಟವೇಟರ್‌ಗಳಿಗೆ ರಿಯಾಯಿತಿದರ – ಅರ್ಜಿ ಹೇಗೆ ಹಾಕುವುದು?

2025-26 ಸಾಲಿನಲ್ಲಿ ರೈತರಿಗೆ ಕೃಷಿ ಉಪಕರಣಗಳಿಗೆ ಶೇ.50ರ ಸಹಾಯಧನ – ಸೋಮವಾರಪೇಟೆ ಮತ್ತು ಕುಶಾಲನಗರ ರೈತರಿಗೆ ಅವಕಾಶ.

2025–26ರ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಕೃಷಿ ಉಪಕರಣಗಳಿಗೆ ಶೇ.50ರ ರಿಯಾಯಿತಿ ನೀಡಲಾಗುತ್ತಿದೆ. ಈ ಯೋಜನೆಯು ಕೃಷಿಯಲ್ಲಿ ಯಾಂತ್ರೀಕರಣವನ್ನು ಉತ್ತೇಜಿಸುವ ಹಾಗೂ ರೈತರಿಗೆ ಆಧುನಿಕ ಉಪಕರಣಗಳ ಉಪಯೋಗವನ್ನು ತಲುಪಿಸಲು ಸಹಕಾರ ನೀಡಲಿದೆ.

ಅರ್ಜಿ ಸಲ್ಲಿಸುವ ವಿಧಾನ:ಆಸಕ್ತ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಪೂರೈಸಬಹುದಾಗಿದೆ. ಅರ್ಜಿ ಜೊತೆಗೆ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:

ಪಹಣಿ (RTC)ಆಧಾರ್ ಕಾರ್ಡ್ ಜೆರಾಕ್ಸ್ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ಒಂದು ಭಾವಚಿತ್ರ₹100ರ ಛಾಪಾಕಾಗದ ದಾಖಲಾತಿ

ಲಭ್ಯವಿರುವ ಉಪಕರಣಗಳು:

ಪವರ್ ಟಿಲ್ಲರ್ಕಲ್ಟಿವೇಟರ್ರೋಟವೇಟರ್ಡಿಸ್ಕ್ ಪ್ಲೋ, ಎಂ.ಬಿ. ಪ್ಲೋಕಳೆಕೊಚ್ಚುವ ಮತ್ತು ಕಳೆ ತೆಗೆಯುವ ಯಂತ್ರಗಳುಡಿಸೇಲ್ ಪಂಪ್ ಸೆಟ್ಪವರ್ ಸ್ಪ್ರೇಯರ್ಮೇವು ಕತ್ತರಿಸುವ ಯಂತ್ರಭತ್ತದ ಒಕ್ಕಣೆ ಯಂತ್ರ, ಕಟಾವು ಯಂತ್ರಭತ್ತದ ಒಕ್ಕಣೆ ಯಂತ್ರ, ಕಟಾವು ಯಂತ್ರಮುಸುಕಿನ ಜೋಳ ಒಕ್ಕಣೆಕೃಷಿ ಸಂಸ್ಕರಣೆ ಯಂತ್ರಗಳು: ರಾಗಿ ಕ್ಲೀನಿಂಗ್, ಹಿಟ್ಟು ಮಾಡುವ ಯಂತ್ರ, ಮೆಣಸಿನ ಪುಡಿ ಮಾಡುವ ಯಂತ್ರ, ಎಣ್ಣೆ ಗಾಣಗಳು.

ಅರ್ಜಿ ಸಲ್ಲಿಸಲು ಅವಕಾಶವಿರುವ ಸ್ಥಳಗಳು:ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ರೈತರಿಗೆ ವಿನಂತಿ:ಈ ಮಹತ್ತ್ವಪೂರ್ಣ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ರೈತರು ಶೀಘ್ರದಲ್ಲಿಯೇ ಅರ್ಜಿ ಸಲ್ಲಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

sreelakshmisai
Author

sreelakshmisai

Leave a Reply

Your email address will not be published. Required fields are marked *